ಕವನಗಳೇ ಹಾಗೆ-
ಅರ್ಥವಾದರೂ ಅರ್ಥವಾಗಲಾರವು
ಅರ್ಥವಾದಷ್ಟು ನಮ್ಮೊಲುಮೆ, ಅಷ್ಟೇ!
ಕವಿಯ ಕಲ್ಪನೆಯ ಸಾರ ದಕ್ಕಲಾರದು ಪೂರ್ತಿ
ಅದರರ್ಥ, ಬದ್ಧತೆಗಳೆಲ್ಲ ಕವಿಗಷ್ಟೇ ಸಂವೇದ್ಯ
ಬದುಕು ಕಾವ್ಯಕ್ಕಿಂತ ಭಿನ್ನವೇನಲ್ಲ;
ನಮ್ಮ ಬದುಕು ನಮ್ಮದೇ ಮಹಾಕಾವ್ಯ
ಅದರ ಸೃಷ್ಟಿ-ದೃಷ್ಟಿಯೆಲ್ಲ ನಮ್ಮದೇ!
ತುಂಬು ಶ್ರದ್ಧೆಯ ಸಾಲುಗಳು
ನೆನಪಾದಾವು ಅದಾರಿಗೋ ಒಮ್ಮೆ
ಅಷ್ಟು ಸಾಕು ಕಾವ್ಯದ ಸಾಫಲ್ಯತೆಗೆ
ಏಕೆಂದರೆ, ಕವನಗಳೇ ಹಾಗೆ-
ಎಲ್ಲ ನುಡಿಗಳೂ ಎಲ್ಲರಿಗೂ ಸಂವೇದ್ಯವಲ್ಲ
ಸಂವೇದ್ಯವಾಗಲೆಂದು ಬರೆದ ಕವನ ನಮ್ಮದಲ್ಲ!!
-ಪ್ರೀತಿಯಿಂದ
ಅಖಿಲಾ
ಅರ್ಥವಾದರೂ ಅರ್ಥವಾಗಲಾರವು
ಅರ್ಥವಾದಷ್ಟು ನಮ್ಮೊಲುಮೆ, ಅಷ್ಟೇ!
ಕವಿಯ ಕಲ್ಪನೆಯ ಸಾರ ದಕ್ಕಲಾರದು ಪೂರ್ತಿ
ಅದರರ್ಥ, ಬದ್ಧತೆಗಳೆಲ್ಲ ಕವಿಗಷ್ಟೇ ಸಂವೇದ್ಯ
ಬದುಕು ಕಾವ್ಯಕ್ಕಿಂತ ಭಿನ್ನವೇನಲ್ಲ;
ನಮ್ಮ ಬದುಕು ನಮ್ಮದೇ ಮಹಾಕಾವ್ಯ
ಅದರ ಸೃಷ್ಟಿ-ದೃಷ್ಟಿಯೆಲ್ಲ ನಮ್ಮದೇ!
ತುಂಬು ಶ್ರದ್ಧೆಯ ಸಾಲುಗಳು
ನೆನಪಾದಾವು ಅದಾರಿಗೋ ಒಮ್ಮೆ
ಅಷ್ಟು ಸಾಕು ಕಾವ್ಯದ ಸಾಫಲ್ಯತೆಗೆ
ಏಕೆಂದರೆ, ಕವನಗಳೇ ಹಾಗೆ-
ಎಲ್ಲ ನುಡಿಗಳೂ ಎಲ್ಲರಿಗೂ ಸಂವೇದ್ಯವಲ್ಲ
ಸಂವೇದ್ಯವಾಗಲೆಂದು ಬರೆದ ಕವನ ನಮ್ಮದಲ್ಲ!!
-ಪ್ರೀತಿಯಿಂದ
ಅಖಿಲಾ
No comments:
Post a Comment