ಬಾಪೂ, ಇಂದು ನೀನಿಲ್ಲ
ಇರುವುದೆಲ್ಲ ನಿನ್ನ ನೆನಪು
ಅಂದು ಹತನಾದರೂ,
ಇಂದಿಗೆ ನೀನೆ ಭಾಗ್ಯವಂತ!
ಮುಚ್ಚಿದ ನಿನ್ನ ಕಣ್ಣೆವೆಗಳಲ್ಲಿ
ಹಸಿರು ಭಾರತದ ಕನಸಿತ್ತು
ಬೆಳ್ಳಗಾಗಿರುವ ನಮ್ಮ ಕಣ್ಣುಗಳಲ್ಲಿ
ಬಣ್ಣವೆಲ್ಲಿಂದ ಬರಬೇಕು?
ನೀವೆಲ್ಲ ನಾಟಿ ಮಾಡಿದ
ಹಸಿರು ಬೆಳೆಯಲಿಲ್ಲ
ಪೈರು ಕಟ್ಟಲೇ ಇಲ್ಲ.
ಆದರ್ಶಗಳ ಮಳೆಯಿಲ್ಲದೆ
ಬತ್ತಿ ಹೋದವೆಷ್ಟೋ?
ಹುಲ್ಲು ಮೇಯ್ವ ಹುಲಿಗಳಿಗೆ
ಎರವಾದುವೆಷ್ಟೋ!
ಉಳಿದಿರುವುದೆಲ್ಲ ಕಮರಿದ
ಕಮಟು ವಾಸನೆಯ ದಂಟು.
ಪ್ರತಿಭೆ, ನೀತಿ, ಆದರ್ಶಗಳ ಮಂದಿ
ಜಪಾನೀ ಮಂಗಗಳಾಗಿಹರಲ್ಲ!
ಇದೆಂತಹ ವಿಕಾಸ??
ಬೋಳುಮರದ ಮೇಲೆ ಕುಳಿತು
ಹೊರದೇಶದ ಹಸಿರ ಕಾಂಬ ಹೊತ್ತು
ಧಗೆಯೆದ್ದು ಜ್ವಾಲೆಯಾಗುವುದಲ್ಲ..
ನೀನೇ ಬಂದರೂ ಬದಲಾಗುವ
ಸ್ಥಿತಿಯಿಲ್ಲ, ಜನರಿಲ್ಲ - ಪಕ್ಷಗಳಿವೆಯಷ್ಟೇ
ನೀನೇ ಹೇಳು, ಸುಧಾರಣೆಗಿದೆಯೇ
ಯಾವುದಾದರೂ ಮುಷ್ಕರದ ಮದ್ದು??
-ಪ್ರೀತಿಯಿಂದ
ಅಖಿಲಾ
ಇರುವುದೆಲ್ಲ ನಿನ್ನ ನೆನಪು
ಅಂದು ಹತನಾದರೂ,
ಇಂದಿಗೆ ನೀನೆ ಭಾಗ್ಯವಂತ!
ಮುಚ್ಚಿದ ನಿನ್ನ ಕಣ್ಣೆವೆಗಳಲ್ಲಿ
ಹಸಿರು ಭಾರತದ ಕನಸಿತ್ತು
ಬೆಳ್ಳಗಾಗಿರುವ ನಮ್ಮ ಕಣ್ಣುಗಳಲ್ಲಿ
ಬಣ್ಣವೆಲ್ಲಿಂದ ಬರಬೇಕು?
ನೀವೆಲ್ಲ ನಾಟಿ ಮಾಡಿದ
ಹಸಿರು ಬೆಳೆಯಲಿಲ್ಲ
ಪೈರು ಕಟ್ಟಲೇ ಇಲ್ಲ.
ಆದರ್ಶಗಳ ಮಳೆಯಿಲ್ಲದೆ
ಬತ್ತಿ ಹೋದವೆಷ್ಟೋ?
ಹುಲ್ಲು ಮೇಯ್ವ ಹುಲಿಗಳಿಗೆ
ಎರವಾದುವೆಷ್ಟೋ!
ಉಳಿದಿರುವುದೆಲ್ಲ ಕಮರಿದ
ಕಮಟು ವಾಸನೆಯ ದಂಟು.
ಪ್ರತಿಭೆ, ನೀತಿ, ಆದರ್ಶಗಳ ಮಂದಿ
ಜಪಾನೀ ಮಂಗಗಳಾಗಿಹರಲ್ಲ!
ಇದೆಂತಹ ವಿಕಾಸ??
ಬೋಳುಮರದ ಮೇಲೆ ಕುಳಿತು
ಹೊರದೇಶದ ಹಸಿರ ಕಾಂಬ ಹೊತ್ತು
ಧಗೆಯೆದ್ದು ಜ್ವಾಲೆಯಾಗುವುದಲ್ಲ..
ನೀನೇ ಬಂದರೂ ಬದಲಾಗುವ
ಸ್ಥಿತಿಯಿಲ್ಲ, ಜನರಿಲ್ಲ - ಪಕ್ಷಗಳಿವೆಯಷ್ಟೇ
ನೀನೇ ಹೇಳು, ಸುಧಾರಣೆಗಿದೆಯೇ
ಯಾವುದಾದರೂ ಮುಷ್ಕರದ ಮದ್ದು??
-ಪ್ರೀತಿಯಿಂದ
ಅಖಿಲಾ
No comments:
Post a Comment