Wednesday, September 4, 2013

ಮುದರಂಗು

ನಾಗಪಂಚಮಿಯಂದು
ಹಳೆಯ ನೆರಳೊಂದು ಹಾದು ಹೋಯ್ತು
ಆ ನೆರಳೆ ಬೆಳಕ ಸೆಲೆಯಾಗಿ,
ಕೈಗೆ ಮದರಂಗಿಯೇರಿತ್ತು..
ಅದಾವ ನಂಬಿಕೆಗಲ್ಲ;
ಬಾಲ್ಯದಲ್ಲೆಲ್ಲೋ ಬಿಟ್ಟ
ಸಂಭ್ರಮದ ಭ್ರಮೆಗಾಗಿ!
ರಂಗು ಹಚ್ಚುವ ಹೊತ್ತು,
ಅಲ್ಲಲ್ಲಿ ಕೊಳೆಯಾಗಿ
ಉಳಿದೆಲ್ಲ ಖಾಲಿಯಾಗಿರುವ
ಮನಸಿಗೂ ಬಣ್ಣವೇರಿಸುವ
ಕನಸಿತ್ತು, ಸುಳ್ಳಲ್ಲ!
ಆಸೆ ಹುಸಿಯಾಗಲಿಲ್ಲ,
ಮದರಂಗಿಯ ತಂಪು
ನೀಡಿತ್ತು ಅಕ್ಕಂದಿರ ಹುರುಪು
ಅವರೊಲವ ನೆನಪು,
ಒಳಗೆಲ್ಲ ಒಸರುವ ಆರ್ದ್ರತೆ
ಅಷ್ಟೇ ಸಾಕು ಈಗ-
ಮದರಂಗಿ ಗಿಡ ನೆಡಲು
ಮತ್ತೆ, ಕೈಗೇರಿದ ಕೆಂಬಣ್ಣ
ಹೊಂಬಣ್ಣ ಸಾಕಲ್ಲ-
ನೀರೆರೆಯಲು ಎಳೆಗಿಡಕೆ,
ಬಣ್ಣ ಹಚ್ಚಲು ಮನಸಿಗೆ!?

-ಪ್ರೀತಿಯಿಂದ, ಅಖಿಲಾ

No comments:

Post a Comment